ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಜರ್ಮನಿ BMZ ಉನ್ನತ ಮಟ್ಟದ ನಿಯೋಗದ ವಿಶೇಷ ಭೇಟಿ
ಜರ್ಮನಿ ಸರ್ಕಾರದ ಫೆಡರಲ್ ಸಚಿವಾಲಯ ಇಕಾನಾಮಿಕ್ ಕೋಆಪರೇಶನ್ ಅಂಡ್ ಡೆವಲಪ್ಮೆಂಟ್ (BMZ) ನ ಉನ್ನತ ಮಟ್ಟದ ನಿಯೋಗವು ತಮ್ಮ ಭಾರತದ ಪ್ರವಾಸದ ಅಂಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ವಿಶೇಷ ಭೇಟಿ ನೀಡಿತು.

ನಿಯೋಗದ ಸದಸ್ಯರು ದೃಷ್ಟಿ ದೋಷ ಹೊಂದಿದ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ಸುಲಭವಾಗಿ ಬಳಸುವಂತೆ ವಿನ್ಯಾಸಗೊಳಿಸಿದ ಧ್ವನಿ ಸ್ಪಂದನ – ಆನ್ಬೋರ್ಡ್ ಸಹಾಯಕ ಧ್ವನಿ–ನೇವಿಗೇಶನ್ ವ್ಯವಸ್ಥೆಯ ಕುರಿತು ನಿಗಮದಿಂದ ನೇರವಾಗಿ ಮಾಹಿತಿ ಪಡೆದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಭಾಆಸೇ., ಧ್ವನಿ ಸ್ಪಂದನ ಯೋಜನೆಯ ಕುರಿತು ಸವಿಸ್ತಾರವಾಗಿ ವಿವರಿಸಿ, ಈ ಯೋಜನೆಗೆ ಭಾರತದ ಸರ್ಕಾರದಿಂದ ಲಭಿಸಿದ ಪ್ರಶಸ್ತಿಯನ್ನು ನಿಯೋಗಕ್ಕೆ ಪರಿಚಯಿಸಿದರು.

BMZ ನ ಮಾನ್ಯ ಮಹಾ ನಿರ್ದೇಶಕಿ ಕ್ರಿಸ್ಟೀನ್ ಟೋಟ್ಝ್ಕೆ, ಬಾರ್ಬರಾ ಶಾಫರ್ ಮತ್ತು ಕ್ರಿಸ್ಟೋಫ್ ವಾನ್ ಸ್ಟೆಕೋವ್ ಈ ನಿಯೋಗದ ಪ್ರಮುಖ ಸದಸ್ಯರಾಗಿದ್ದು, ರೈಸ್ಡ್ ಲೈನ್ಸ್ ಫೌಂಡೇಶನ್ ಅಭಿವೃದ್ಧಿಪಡಿಸಿದ ಮತ್ತು GIZ ನ ಗ್ರೀನ್ ಅರ್ಬನ್ ಮೊಬಿಲಿಟಿ ಇನೋವೇಶನ್ ಮುಂದಾಳತ್ವದಲ್ಲಿ ವಿಸ್ತರಿಸಲ್ಪಟ್ಟ ಆನ್ಬೋರ್ಡ್ ವ್ಯವಸ್ಥೆಯ ಜಾರಿಗೆ ಸಂಬಂಧಿಸಿದ ವಿವರಗಳನ್ನು ವೀಕ್ಷಿಸಿದರು.

ಭೇಟಿಯ ಸಂದರ್ಭದಲ್ಲಿ ನಿಯೋಗವು ಮೈಸೂರು ನಗರ ಬಸ್ಗಳಲ್ಲಿ ಕಾರ್ಯಾಚರಣೆಯಲ್ಲಿರುವ ಉಪಕರಣವನ್ನು ನೇರವಾಗಿ ಅನುಭವಿಸಿ, ಎಲ್ಲ ವರ್ಗಗಳಿಗೂ ಅನುಗುಣವಾದ ಮತ್ತು ಸುಲಭಪ್ರವೇಶದ ಸಂಚಾರ ವ್ಯವಸ್ಥೆ ಅಭಿವೃದ್ಧಿಯತ್ತ ನಿಗಮ ಕೈಗೊಂಡಿರುವ ಹೆಜ್ಜೆಗಳನ್ನು ಮೆಚ್ಚಿತು. ನವೀನ, ಬಳಕೆದಾರ ಕೇಂದ್ರೀಕೃತ mobility ಪರಿಹಾರಗಳನ್ನು ಅಳವಡಿಸುವಲ್ಲಿ ನಿಗಮ ತೋರಿದ ನಾಯಕತ್ವವನ್ನು ಪ್ರಶಂಸಿಸಿ, ಮೈಸೂರಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದಕ್ಕೆ ಅಭಿನಂದಿಸಿದರು.
ಈ ಭೇಟಿಯಲ್ಲಿ ಜರ್ಮನ್ ರಾಯಭಾರ ಕಚೇರಿ – ನವದೆಹಲಿಯ ಪ್ರತಿನಿಧಿಗಳಾದ ಗೊಟ್ಫ್ರೈಡ್ ವಾನ್ ಗೆಮಿಂಗನ್, ಪಾಮೇಲಾ ಬೈಜಲ್, ಜೋಹಾನ್ಸ್ ಶ್ನೈಡರ್, ಶೀನಂ ಪುರಿ, ಜಾಸ್ಮಿನ್ ಕೌರ್ ಹಾಗು ಜಿಐಝಡ್ ದೇಶ ನಿರ್ದೇಶಕಿ ಜುಲಿ ರೆವಿಯರ್ ಉಪಸ್ಥಿತರಿದ್ದರು.



Post Comment