×

ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಕಲ್ಯಾಣ ಕರ್ನಾಟಕದ ಸಾರಿಗೆ ವ್ಯವಸ್ಥೆಗೆ ಹೊಸ ರೂಪ

ಹೊಸ ಬಸ್ ನಿಲ್ದಾಣಗಳು, ವಸತಿ ಗೃಹಗಳ ಉದ್ಘಾಟನೆ 

ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿಯವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ವ್ಯಾಪ್ತಿಯಲ್ಲಿ ಸಾರಿಗೆ ಸೌಲಭ್ಯಗಳ ವೇಗವಾದ ಅಭಿವೃದ್ಧಿಗೆ ಕ್ರಮಗಳು ಕೈಗೊಳ್ಳಲಾಗಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕಕರಸಾ) ವ್ಯಾಪ್ತಿಯಲ್ಲಿ ಹಲವಾರು ಹೊಸ ಬಸ್ ನಿಲ್ದಾಣಗಳು, ಸಿಬ್ಬಂದಿ ವಸತಿ ಗೃಹಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆದಿದೆ. 

%voice of karnataka % top kannada news

ಕೊಪ್ಪಳ ಜಿಲ್ಲೆ: 

– ಬೇವೂರು: 1 ಎಕರೆ ಪ್ರದೇಶದಲ್ಲಿ ₹450 ಲಕ್ಷದ ಬಸ್ ನಿಲ್ದಾಣದ ಶಂಕುಸ್ಥಾಪನೆ. 

– ಹಿರೇವಂಕಲಕುಂಟಾ: 1 ಎಕರೆ ಪ್ರದೇಶದಲ್ಲಿ ₹300 ಲಕ್ಷದ ಬಸ್ ನಿಲ್ದಾಣದ ಶಂಕುಸ್ಥಾಪನೆ. 

ವಿಜಯಪುರ ಜಿಲ್ಲೆ: 

– ನಾಗಠಾಣ: 10 ಗುಂಟೆ ಪ್ರದೇಶದಲ್ಲಿ ₹150 ಲಕ್ಷದ ಹೊಸ ಬಸ್ ನಿಲ್ದಾಣ ಉದ್ಘಾಟನೆ. 

– ದೇವರ ಹಿಪ್ಪರಗಿ: 1.16 ಎಕರೆ ಪ್ರದೇಶದಲ್ಲಿ ₹400 ಲಕ್ಷದ ಬಸ್ ನಿಲ್ದಾಣ ಉದ್ಘಾಟನೆ. 

– ಸಿಂದಗಿ: ಸಿಬ್ಬಂದಿಗಾಗಿ 3.8 ಎಕರೆ ಪ್ರದೇಶದಲ್ಲಿ ₹250 ಲಕ್ಷದ ವಸತಿ ಗೃಹ ಉದ್ಘಾಟನೆ. ಸಿಂದಗಿ ಬಸ್ ನಿಲ್ದಾಣಕ್ಕೆ “ಚನ್ನವೀರ ಸ್ವಾಮಿಜಿ ಬಸ್ ನಿಲ್ದಾಣ” ಎಂದು ನಾಮಕರಣ. 

ರಾಯಚೂರು ಜಿಲ್ಲೆ: 

– ಸಿರವಾರ: 1 ಎಕರೆ ಪ್ರದೇಶದಲ್ಲಿ ₹250 ಲಕ್ಷದ ಬಸ್ ನಿಲ್ದಾಣ ಉದ್ಘಾಟನೆ. 

### ಯಾದಗಿರಿ ಜಿಲ್ಲೆ: 

– ಮಾದ್ವಾರ: 1.03 ಗುಂಟೆ ಪ್ರದೇಶದಲ್ಲಿ ₹50 ಲಕ್ಷದ ಬಸ್ ನಿಲ್ದಾಣ ಉದ್ಘಾಟನೆ. 

%voice of karnataka % top kannada news

ಮಹಿಳಾ ಸ್ವಸಹಾಯ ಸಂಘದ ಸಾಧನೆ: 
ಇಂಡಿ ತಾಲೂಕಿನ ಬಬಲಾದ ಗ್ರಾಮದ ಒಡಲ ಧನಿ ಸ್ವಸಹಾಯ ಸಂಘದ ಮಹಿಳೆಯರು ಸಾವಯವ ಶೇಂಗಾ ಹೋಳಿಗೆ, ರೊಟ್ಟಿ ಮುಂತಾದ ಗ್ರಾಮೀಣ ಆಹಾರ ಪದಾರ್ಥಗಳನ್ನು ಬೆಂಗಳೂರಿನ ರಾಗಿ ಕಣಜ ಮತ್ತು ಸಾವಯವ ಸಂತೆಗಳಲ್ಲಿ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ. ಸಚಿವರಿಗೆ ಸಂದರ್ಶನ ನೀಡಿ ತಮ್ಮ ಯಶಸ್ಸನ್ನು ಹಂಚಿಕೊಂಡ ಮಹಿಳೆಯರು, ಶಕ್ತಿ ಯೋಜನೆಯಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿರುವುದನ್ನು  ವಿವರಿಸಿದರು. 

ಸಮಾರಂಭಗಳಲ್ಲಿ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ರಾಯರೆಡ್ಡಿ, ಕೊಪ್ಪಳ ಸಂಸದ ರಾಜಶೇಖರ ಬಸವರಾಜ ಹಿಟ್ನಾಳ್, ಕಲಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರು ವಿಠ್ಠಲ ಕಟಕದೊಂಡ (ನಾಗಠಾಣ), ಭೀಮನಗೌಡ ಪಾಟೀಲ (ದೇವರ ಹಿಪ್ಪರಗಿ), ಅಶೋಕ ಮನಗೂಳಿ (ಸಿಂದಗಿ), ಹಂಪಯ್ಯ ನಾಯಕ (ಮಾನ್ವಿ), ಶರಣಗೌಡ ಕಂದಕೂರ (ಗುರುಮಿಠಕಲ್) ಹಾಗೂ ಕಕರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಹಾಜರಿದ್ದರು. 

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed