×

ಮಂಗಳೂರಿನಲ್ಲಿ ರೂ.7.5 ಕೋಟಿಗಳ ವೆಚ್ಚದಲ್ಲಿ ನಿರ್ಮಿತ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಉದ್ಘಾಟನೆ

ಮಂಗಳೂರು, ಜುಲೈ 13:
ರಾಜ್ಯದಲ್ಲಿ ಚಾಲನಾ ನೈಪುಣ್ಯತೆಯನ್ನು ವೈಜ್ಞಾನಿಕ ಹಾಗೂ ಸಮರ್ಪಕವಾಗಿ ಪರೀಕ್ಷಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಪ್ರತಿ ಜಿಲ್ಲೆಗೆ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯಡಿ, ಮಂಗಳೂರಿನಲ್ಲಿ ರೂ.7.5 ಕೋಟಿಗಳ ವೆಚ್ಚದಲ್ಲಿ ನಿರ್ಮಿತ ಪಥವನ್ನು ಇಂದು ಉದ್ಘಾಟಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾದ್ಯಕ್ಷ ಯು.ಟಿ. ಖಾದರ್ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತರಿದ್ದರು.

ದಿನೇ ದಿನೇ ರಾಜ್ಯದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ಹಿನ್ನೆಲೆಯಲ್ಲಿ, ಚಾಲಕರ ನೈಪುಣ್ಯ ಪರೀಕ್ಷೆಯು ಅತ್ಯಂತ ಅಗತ್ಯವಾಗಿರುವ ಈ ಸಂದರ್ಭದಲ್ಲಿ, ಮಂಗಳೂರು ಸಹಿತ ಹಲವೆಡೆ ಈ ಮಾದರಿಯ ಪಥಗಳ ನಿರ್ಮಾಣ ಮಾಡಲಾಗಿದೆ.

ಈತನಕ ಜ್ಞಾನಭಾರತಿ, ಎಲೆಕ್ಟ್ರಾನಿಕ್ ಸಿಟಿ, ಮೈಸೂರು, ಕಲಬುರಗಿ, ಧಾರವಾಡ, ಶಿವಮೊಗ್ಗ ಮತ್ತು ಹಾಸನಗಳಲ್ಲಿ ರೂ.31.21 ಕೋಟಿ ವೆಚ್ಚದಲ್ಲಿ ಈ ರೀತಿಯ ಪಥಗಳನ್ನು ಸ್ಥಾಪಿಸಲಾಗಿದೆ.

ಕಟ್ಟಡ ಕಾಮಗಾರಿಗಳು ಮತ್ತು ಡ್ರೈವಿಂಗ್ ಪಥಗಳ ಸ್ಥಿತಿ:

  • ರೂ.36 ಕೋಟಿ ವೆಚ್ಚದಲ್ಲಿ ಧಾರವಾಡ ಪೂರ್ವ, ಕೊಪ್ಪಳ, ಚಿಂತಾಮಣಿ, ಶಿರಸಿ, ದಾಂಡೇಲಿ, ಭಾಲ್ಕಿ ಕಡೆಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ.
  • ರೂ.42 ಕೋಟಿ ವೆಚ್ಚದಲ್ಲಿ ಬೀದರ್, ಕಲಬುರಗಿ, ಯಾದಗಿರಿ, ಚಂದಾಪುರ, ಕೆ.ಜಿ.ಎಫ್, ಬೆಳಗಾವಿ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
  • ರೂ.28 ಕೋಟಿ ವೆಚ್ಚದಲ್ಲಿ ರಾಣೆಬೆನ್ನೂರು, ಗೋಕಾಕ್, ಸಕಲೇಶಪುರಗಳಲ್ಲಿ ಕಾಮಗಾರಿ ನಡೆಯುತ್ತಿದೆ; ಮಧುಗಿರಿ ಹಾಗೂ ಹೊನ್ನಾವರ ಕಾಮಗಾರಿ ಶೀಘ್ರ ಪ್ರಾರಂಭ.

ನಿರ್ಮಾಣ ಹಂತದ ಸ್ವಯಂಚಾಲಿತ ಪಥಗಳು:

  • ಬೆಳಗಾವಿ ಮತ್ತು ರಾಯಚೂರು – ರೂ.16 ಕೋಟಿಗಳ ವೆಚ್ಚದಲ್ಲಿ
  • ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ, ದಾವಣಗೆರೆ – ರೂ.80 ಕೋಟಿ ವೆಚ್ಚದಲ್ಲಿ
  • ನಾಗಮಂಗಲ, ಯಲಹಂಕ, ಶಿರಸಿ, ಸಕಲೇಶಪುರ, ಕೆ.ಜಿ.ಎಫ್, ಚಿಂತಾಮಣಿ, ಸಾಗರ, ಗೋಕಾಕ್, ರಾಣೆಬೆನ್ನೂರು, ದಾಂಡೇಲಿ, ಭಾಲ್ಕಿ, ಬೈಲಹೊಂಗಲ – ರೂ.71 ಕೋಟಿ ವೆಚ್ಚದಲ್ಲಿ

ರಸ್ತೆ ಸುರಕ್ಷತಾ ನಿಧಿಯಿಂದ ರೂಪುಗೊಳ್ಳುವ ಯೋಜನೆಗಳು:

  • ಪುತ್ತೂರು, ನೆಲಮಂಗಲ, ಚಿಕ್ಕಬಳ್ಳಾಪುರ, ಮಡಿಕೇರಿ, ಮಧುಗಿರಿ, ಹುಣಸೂರು, ಚಾಮರಾಜನಗರ, ಚಿತ್ರದುರ್ಗ ಸೇರಿ ಹಲವು ಕಡೆಗಳಲ್ಲಿ ರೂ.57 ಕೋಟಿ ವೆಚ್ಚದಲ್ಲಿ ಚಾಲನಾ ಪಥ ನಿರ್ಮಾಣಕ್ಕೆ ಕ್ರಮ.

ಸ್ವಯಂ ಚಾಲಿತ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆ:

  • ಪಿಪಿಪಿ ಮಾದರಿಯಲ್ಲಿ 32 ಜಿಲ್ಲೆಗಳಲ್ಲಿ, ಸೇರಿದಂತೆ ಬೆಂಗಳೂರು (ಕೇಂದ್ರ, ಪಶ್ಚಿಮ, ಪೂರ್ವ, ದಕ್ಷಿಣ), ಶಿವಮೊಗ್ಗ, ಕೋಲಾರ, ಬಾಗಲಕೋಟೆ, ಬಳ್ಳಾರಿ, ಬೀದರ್, ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲೂ ಕೇಂದ್ರ ಸ್ಥಾಪನೆ ಪ್ರಗತಿಯಲ್ಲಿ ಇದೆ.

ಈ ಎಲ್ಲಾ ಯತ್ನಗಳು ಚಾಲಕರ ಸುರಕ್ಷತೆ, ಸಾರ್ವಜನಿಕರ ಸುರಕ್ಷತೆ ಹಾಗೂ ಚಾಲನಾ ಪರವಾನಗಿ ಪ್ರಕ್ರಿಯೆಯ ನಿಖರತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed