×

ಕೆ.ಎಸ್.ಆರ್.ಟಿ.ಸಿ ಗೆ ತ್ರಿವಳಿ ಗೌರವ

ಬೆಂಗಳೂರು, ಸೆಪ್ಟೆಂಬರ್ 18:
ರಾಜ್ಯದ ಹೆಮ್ಮೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ) ರಾಷ್ಟ್ರಮಟ್ಟದಲ್ಲಿಯೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತನ್ನ ಸಾಧನೆಗೆ ಮತ್ತೊಂದು ಮೆರಗು ತುಂಬಿಕೊಂಡಿದೆ.

%voice of karnataka % top kannada news

ಮುಂಬಯಿಯಲ್ಲಿ ನಡೆದ Most Trusted Brands Awards – 2025 ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಟಿ.ಸಿ ಗೆ ಎರಡು ಪ್ರಮುಖ ಪ್ರಶಸ್ತಿಗಳು ಲಭಿಸಿವೆ. ಪ್ರಯಾಣಿಕರ ಸ್ನೇಹಿ ಸೇವೆಗಳು, ಬಸ್ಸುಗಳ ವೈವಿಧ್ಯಮಯ ಬ್ರ್ಯಾಂಡಿಂಗ್, ಜನಸ್ನೇಹಿ ನಿರ್ವಹಣೆಗಾಗಿ “Best Transport Company of India” ಹಾಗೂ “Most Trusted Brands (Organization)” ಎಂಬ ಎರಡು ಪ್ರಶಸ್ತಿಗಳನ್ನು ಹಿರಿಯ ಚಲನಚಿತ್ರ ನಟಿ ಸುಧಾ ಚಂದ್ರನ್ ಮತ್ತು ವಾಗ್ಮರೆ ಅವರು ನಿಗಮದ ಹಿರಿಯ ಅಧಿಕಾರಿಗಳಿಗೆ ಪ್ರದಾನ ಮಾಡಿದರು.

ಅದೇ ರೀತಿ, ಬೆಂಗಳೂರಿನಲ್ಲಿ ನಡೆದ 4th Edition of the Asia Pacific HRM Congress & Awards ಸಮಾರಂಭದಲ್ಲಿ ಕೆ.ಎಸ್.ಆರ್.ಟಿ.ಸಿ ಗೆ “Top Most Organizations with Innovative HR Practices” ಎಂಬ ಗೌರವ ದೊರಕಿದೆ. ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ನೌಕರರ ಕಲ್ಯಾಣ ಕಾರ್ಯಕ್ರಮಗಳು, ತಂತ್ರಜ್ಞಾನ ಆಧಾರಿತ ಕ್ರಮಗಳು ಹಾಗೂ ನವೀನತೆಯನ್ನು ಉತ್ತೇಜಿಸಿದ ಪ್ರಯತ್ನಕ್ಕೆ ಈ ಗೌರವ ಲಭಿಸಿದೆ.

ಈ ಸಂದರ್ಭದಲ್ಲಿ, ನಿಗಮದ ಅರುಣ ಎಸ್.ಎನ್., ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ (ಕೆಂಪೇಗೌಡ ಬಸ್ ನಿಲ್ದಾಣ ವಿಭಾಗ), ಎಂ.ನವೀನ್, ಕಾರ್ಯ ವ್ಯವಸ್ಥಾಪಕರು (ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು), ಶ್ಯಾಮಲಾ (ಉಪ ಮುಖ್ಯ ಕಾನೂನು ಅಧಿಕಾರಿ) ಹಾಗೂ ಶಕುಂತಲಾ (ಕಾನೂನು ಅಧಿಕಾರಿ) ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಈ ಸಾಧನೆಯೊಂದಿಗೆ, ಕೆ.ಎಸ್.ಆರ್.ಟಿ.ಸಿ ತನ್ನ ಸೇವಾ ದಕ್ಷತೆ, ಪ್ರಯಾಣಿಕರ ವಿಶ್ವಾಸ ಹಾಗೂ ನೌಕರರ ಸ್ನೇಹಿ ಕ್ರಮಗಳಿಂದ ದೇಶದ ಸಾರಿಗೆ ವಲಯದಲ್ಲಿ ಮಾದರಿಯ ಸಂಸ್ಥೆಯಾಗಿ ಮೆರೆಯುತ್ತಿದೆ.

Voice of Karnataka is a premier Kannada news portal dedicated to delivering timely and relevant news to our readers. Under the leadership of News Editor Irfan Uppinangady, we focus on providing in-depth coverage and diverse perspectives on local, national, and global issues. Committed to integrity and excellence in journalism, we strive to be the voice of the community, keeping our audience informed and engaged.

Post Comment

You May Have Missed